
21st June 2025
_*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಘಟಕ ಬೆಳಗಾವಿ.*_
👥👥👥👥👥👥👥👥
_*ಜಂಟಿ ಸಮಾಲೋಚನಾ ಸಭೆ*_
_ಇಂದು ಶನಿವಾರ.. ಮಾನ್ಯ ಉಪನಿರ್ದೇಶಕರಾದ *ಶ್ರೀಮತಿ ಲೀಲಾವತಿ ಹಿರೇಮಠ ಮೇಡಂ* ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಹಾಗೂ ವಿವಿಧ ಸಂಘಟನೆಗಳ ಸಭೆ ನಡೆಯಿತು._
_*ಚರ್ಚಿಸಿದ ವಿಷಯಗಳು.*_
_1) ವರ್ಗಾವಣೆ ( ಹೆಚ್ಚುವರಿ, ಪರಸ್ಪರ ಮತ್ತು ಕೋರಿಕೆ) ಕುರಿತು._
_2) ತಾಲೂಕ ಹಂತಗಳಲ್ಲಿ ಕಾಲಕಾಲಕ್ಕೆ ಶಿಕ್ಷಕ ಸ್ಪಂದನ ಕಾರ್ಯಕ್ರಮಗಳನ್ನು ನಡಸಿ, ಶಿಕ್ಷಕರಿಗೆ ಸೇವಾ ಪುಸ್ತಕ ವೀಕ್ಷಿಸಲು ಅವಕಾಶ ನೀಡುವುದು._
_3) ಹೆಚ್ಚುವರಿಯಾಗಿ ಶಿಕ್ಷಕರಿಗೆ ಬಿ ಎಲ್ ಓ ಕಾರ್ಯದ ಆದೇಶ ವಿತರಿಸುತ್ತಿರುವುದು._
_4) ತಾಲೂಕುಗಳಲ್ಲಿ ಬಿ ಇ ಓ ಕಚೇರಿಯಿಂದ ಶಿಕ್ಷಣ ಅಧಾಲತ ಕಾರ್ಯಕ್ರಮ ನಡೆಸುವದು._
_5) ಪ್ರಧಾನ ಗುರುಗಳಿಗೆ ಆಗುತ್ತಿರುವ ಆನ್ಲೈನ್ ಕೆಲಸ ಮತ್ತು ಮಾಹಿತಿಯ ಒತ್ತಡ ಕಡಿಮೆ ಗೊಳಿಸಲು ವಿಶೇಷ ಯೋಜನೆ ಹಾಕಿಕೊಳ್ಳುವುದು._
_6) ಶಿಕ್ಷಕರು ತರಗತಿಯಿಂದ ಹೊರಗೆ ಬರದಂತೆ ಬಿಇಓ ಕಚೇರಿಯಿಂದ ಆಗಬೇಕಾದ ಶಿಕ್ಷಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿ ಕೊಡುವುದು._
_7) ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇತರೆ ವಿಷಯಗಳ ಚರ್ಚೆ._
_ಈ ರೀತಿಯಾಗಿ ಇನ್ನು ಹಲವು ವಿಷಯಗಳ ಕುರಿತು ಮಾನ್ಯ ಉಪನಿರ್ದೇಶಕರೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು.. ಮಾನ್ಯರು ಧನಾತ್ಮಕವಾಗಿ ಸ್ಪಂದಿಸಿ, ಸಂಘಟನೆ ಮತ್ತು ಇಲಾಖೆ ಸೇರಿಕೊಂಡು ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕರ ಸೇವೆಗೆ ಸಂಬಂಧಿಸಿದ ಕೆಲಸಗಳು ಮತ್ತು ಕಾಲಕಾಲಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುತ್ತಾ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಮಾಡಿಕೊಂಡು ಹೋಗೋಣ ಎಂದು ಭರವಸೆ ನೀಡಿದರು.._
_ಈ ಸಂದರ್ಭದಲ್ಲಿ ಮಾನ್ಯ ಉಪನಿರ್ದೇಶಕರು ಮತ್ತು ಸಿಬ್ಬಂದಿಯವರು, ಏಳು ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿಯವರು ಮತ್ತು ವಿವಿಧ ಸಂಘಟನೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು._
_*ಸಂಘಟನೆಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಶಿಕ್ಷಕರ ಕೆಲಸ ಮಾಡಿ ಕೊಡುವ ಭರವಸೆ ನೀಡಿದ ಉಪನಿರ್ದೇಶಕರಿಗೂ, ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳು.*_
_*ಮಾಹಿತಿ : ಜಯಕುಮಾರ ಹೆಬಳಿ ಅಧ್ಯಕ್ಷರು, ರಮೇಶ ಗೋಣಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಬೆಳಗಾವಿ..*_
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು